ಮಂಗಳವಾರ, ಅಕ್ಟೋಬರ್ 12, 2010

"ನಾನು" ಎಂಬುದು ಸ್ವ ಅಸ್ತಿತ್ವ ಅಲ್ಲ ಎಂಬುದನ್ನು ಅರಿಯುವದು ಅತಿ ಅವಶ್ಯ


ನಿರಾಕಾರ ಮಾರ್ಗದಿಂದ ಆತ್ಮಜ್ಞಾನ ನಿಶ್ಚಿತ. ಆಕಾರದಿಂದ  ನಿರಾಕಾರದೆಡೆಗೆ ಸಾಗಲು ದೇಹಾದಾರಿತವಾದಂತಹ  ದರ್ಮ,ದೇವರು, ಜಗತ್ತು ಹಾಗೂ ದೇಹದರಿತವಾದ ಎಲ್ಲ ಜ್ಞಾನಗಳು ಮೂಲವಾದ ಅಡೆತಡೆಗಳು. ಅವುಗಳನ್ನು  ಮಿರಿ  ವಿಚಾರಗಳು  ಮುಂದೆ  ಸಾಗಿದಾಗ ಮಾತ್ರ  ಪರಮ   ಸತ್ಯದ  ಅರಿವಾಗತೋಡಗುವದು. 
  
ವ್ಯಕ್ತಿಗತ  ಅನುಬವಗಳಿಗೂ ಹಾಗೂ ಸ್ವ ಅಸ್ತಿತ್ವಕ್ಕೂ ಯಾವ ಸಂಬಂದವೂ ಇಲ್ಲ. ಸ್ವ ಅಸ್ತಿತ್ವ ನಿರಾಕಾರವಾಗಿರುವದರಿಂದ ಅದು ಸಂಸ್ಕಾರ ಹಾಗೂ ಸಂಸಾರ ಬಂದನದ  ಕಕ್ಷೆಯಿಂದ ಹೊರಗಿರುವದರಿಂದ, ಜನನ,ಜೀವನ ,ಮರಣದ ಹಾಗೂ ಜಗತ್ತಿನ  ಅನುಬವಗಳು, ಸ್ವ ಅಸ್ತಿತ್ವದ ದೃಷ್ಟಿಕೋನದಲ್ಲಿ  ಮಿತ್ಯ ಮಾತ್ರ.  ಆದರಿಂದ "ನಾನು" ಎಂಬುದು ಸ್ವ ಅಸ್ತಿತ್ವ ಅಲ್ಲ ಎಂಬುದನ್ನು  ಅರಿಯುವದು ಅತಿ ಅವಶ್ಯ.           
Enhanced by Zemanta

ಇಡಿ ಬ್ರಹ್ಮಾಂಡದಲ್ಲಿ ನಿರಾಕಾರವಾಗಿ ಆವರಿಸಿರುವ ಅರಿವಿನ ರೂಪದಲ್ಲಿರುವ ಆತ್ಮವನ್ನು ಚರ್ಮ ದೃಷ್ಟಿಯಿಂದ ಗ್ರಹಿಸುವದು ಅಸಾದ್ಯ.


ದೇಹಕ್ಕೆ  ಇಟ್ಟ  ಹೆಸರನ್ನು  ಸ್ವ  ಅಸ್ತಿತ್ವ  ಎಂದು  ಬಗೆದು ದೇಹವಲ್ಲದ ನಿರಾಕಾರವಾದ   ಈ ಸ್ವ ಅಸ್ತಿತ್ವದ  ಬಗ್ಗೆ  ನಿರ್ದರಿಸುವದು ಮೂರ್ಖತನ.  ಈ ನಿರಕಾರವಾದ ಸ್ವ ಅಸ್ತಿತ್ವದ   ಆದಾರದ ಮೇಲೆ ಅಸ್ತಿತ್ವಹೊಂದಿರುವ  ಮನಸ್ಸಿನ ರೂಪದಲ್ಲಿರುವ ಜಗತ್ತು ಹಾಗೂ  ಈ ಜಗತ್ತಿನ ಅಸ್ತಿತ್ವದ ಮೇಲೆ ಆದರಿಸಿರುವ   ವ್ಯಕ್ತಿಗತ    ಜೀವನ,  ಅಥವಾ ಜನನ,ಜೀವನ ಹಾಗೂ ಮರಣದ ಅನುಬವಗಳೆಲ್ಲವೂ   ಸ್ವ ಅಸ್ತಿತ್ವದ  ದೃಷ್ಟಿಕೋನದಲ್ಲಿ ಮರೀಚಿಕೆ ಮಾತ್ರ.  

ಇಡಿ ಬ್ರಹ್ಮಾಂಡದಲ್ಲಿ  ನಿರಾಕಾರವಾಗಿ ಆವರಿಸಿರುವ ಅರಿವಿನ ರೂಪದಲ್ಲಿರುವ ಆತ್ಮವನ್ನು  ಚರ್ಮ ದೃಷ್ಟಿಯಿಂದ ಗ್ರಹಿಸುವದು ಅಸಾದ್ಯ. ಮನಸ್ಸಿನ ರೂಪದಲ್ಲಿರುವ ಬ್ರಹ್ಮಾಂಡವೆ  ಆತ್ಮದಲ್ಲಿರಿವಾಗ  ಹಾಗೂ ಆತ್ಮಾದಾರಿತವಾಗಿರುವಾಗ , ಈ ಬ್ರಹ್ಮಾಂಡದ ಮೂಲವನ್ನಿರಿಯದೆ ಪರಮ ಸತ್ಯದ ಅರಿವೂ ಅಸಾದ್ಯ.