ಮಂಗಳವಾರ, ಅಕ್ಟೋಬರ್ 12, 2010

ಇಡಿ ಬ್ರಹ್ಮಾಂಡದಲ್ಲಿ ನಿರಾಕಾರವಾಗಿ ಆವರಿಸಿರುವ ಅರಿವಿನ ರೂಪದಲ್ಲಿರುವ ಆತ್ಮವನ್ನು ಚರ್ಮ ದೃಷ್ಟಿಯಿಂದ ಗ್ರಹಿಸುವದು ಅಸಾದ್ಯ.


ದೇಹಕ್ಕೆ  ಇಟ್ಟ  ಹೆಸರನ್ನು  ಸ್ವ  ಅಸ್ತಿತ್ವ  ಎಂದು  ಬಗೆದು ದೇಹವಲ್ಲದ ನಿರಾಕಾರವಾದ   ಈ ಸ್ವ ಅಸ್ತಿತ್ವದ  ಬಗ್ಗೆ  ನಿರ್ದರಿಸುವದು ಮೂರ್ಖತನ.  ಈ ನಿರಕಾರವಾದ ಸ್ವ ಅಸ್ತಿತ್ವದ   ಆದಾರದ ಮೇಲೆ ಅಸ್ತಿತ್ವಹೊಂದಿರುವ  ಮನಸ್ಸಿನ ರೂಪದಲ್ಲಿರುವ ಜಗತ್ತು ಹಾಗೂ  ಈ ಜಗತ್ತಿನ ಅಸ್ತಿತ್ವದ ಮೇಲೆ ಆದರಿಸಿರುವ   ವ್ಯಕ್ತಿಗತ    ಜೀವನ,  ಅಥವಾ ಜನನ,ಜೀವನ ಹಾಗೂ ಮರಣದ ಅನುಬವಗಳೆಲ್ಲವೂ   ಸ್ವ ಅಸ್ತಿತ್ವದ  ದೃಷ್ಟಿಕೋನದಲ್ಲಿ ಮರೀಚಿಕೆ ಮಾತ್ರ.  

ಇಡಿ ಬ್ರಹ್ಮಾಂಡದಲ್ಲಿ  ನಿರಾಕಾರವಾಗಿ ಆವರಿಸಿರುವ ಅರಿವಿನ ರೂಪದಲ್ಲಿರುವ ಆತ್ಮವನ್ನು  ಚರ್ಮ ದೃಷ್ಟಿಯಿಂದ ಗ್ರಹಿಸುವದು ಅಸಾದ್ಯ. ಮನಸ್ಸಿನ ರೂಪದಲ್ಲಿರುವ ಬ್ರಹ್ಮಾಂಡವೆ  ಆತ್ಮದಲ್ಲಿರಿವಾಗ  ಹಾಗೂ ಆತ್ಮಾದಾರಿತವಾಗಿರುವಾಗ , ಈ ಬ್ರಹ್ಮಾಂಡದ ಮೂಲವನ್ನಿರಿಯದೆ ಪರಮ ಸತ್ಯದ ಅರಿವೂ ಅಸಾದ್ಯ.      

2 ಕಾಮೆಂಟ್‌ಗಳು:

  1. ಆತ್ಮದ ಚಿಂತನೆ

    ಆತ್ಮವೆಂಬ ಆ ಮಿಥ್ಯೆಯಲ್ಲಿಂದು ಮಳುಗದಿರು ಮನುಜ
    ಆತ್ಮವದು ನೀ ಹುಟ್ಟುವ ಮೊದಲು ಏಲ್ಲಿತ್ತೋ ಮನುಜ
    ಸತ್ತಮೇಲೆ ಆತ್ಮ ಹೋಗುವದಾರಿ ಅರಿಯರಾರು ಮನುಜ
    ಆತ್ಮ ಆತ್ಮವೆಂಬುದೇ ಕಾಣರಿಯದ ಮಿಥ್ಯವಲ್ಲವೇ ಮನುಜ

    ಆತ್ಮಕ್ಕೆ ಅಳಿವಿಲ್ಲವೆಂದು ಅರಿತವರಾರಿಲ್ಲ ಈ ಮೂಜಗದಲ್ಲಿ
    ಆತ್ಮವದು "ನಿರ್" ನಿರಾಕಾರ ನಿರಾಧಾರ ನಿರ್ಗುಣವೇ ಇಲ್ಲಿ
    ಆತ್ಮದ ಚಿಂತನೆಯಲ್ಲಿ ಮುಳುಗದಿರದು ಕಾಲಹರಣವೆಯಿಲ್ಲಿ
    ಸತ್ಯವಲ್ಲದ ಮರಿಚಿಕೆ ಹೇಗೆ, ಹಾಗೆಯೇ ಆತ್ಮವು ಮಿಥ್ಯವಿಲ್ಲಿ

    ತತ್ವದಲಿ ಬುದ್ಧನಂದೇ ಅಂದ ಆತ್ಮವೆಂಬುದೇ ಬರೀ ವದಂತಿ
    ಮತ ಬೇಧದ ಚಿಂತೆಯೇ ತುಂಬಿದ ಜಗದಲ್ಲಿ ಸೋಜಿಗವಿಲ್ಲಿ
    ಮತಿಗೆಟ್ಟ ಮನುಜರ ಮಧ್ಯೆಯಲಿ ಹೊರಾಟ ಸಹಜವಿರುವಲ್ಲಿ
    ಅತ್ತ ಇತ್ತ ಮೊತ್ತ ಮನುಜರು ಹೇಳಿದ ಮಾತು ಕಹಿಸತ್ಯವು

    ಇತ್ತ ಭವದೀ ನಶ್ವರದ ಬದುಕಲ್ಲಿ ತಾನು ನೀನೆಂದು ಬಗೆದು
    ಆತ್ಮ ಆ ಙ್ಞಾನವು ಜೀವನದೆಂದಿಗೂ ಅರಿಯದು ನಮಗದು
    ಆತ್ಮ ಙ್ಞಾನದ ಅರಿವು ಅಸಾಧ್ಯವೆಂಬುದೇ ಪರಮ ಸತ್ಯವು
    ಮಿಥ್ಯಯೀ ಮೂಢನಂಬಿಕೆಯ ಧರ್ಮಾಧರ್ಮದಿ ಬದಕದಿರಿಲ್ಲಿ

    ಪ್ರತ್ಯುತ್ತರಅಳಿಸಿ