ಭಾನುವಾರ, ಸೆಪ್ಟೆಂಬರ್ 19, 2010

ಈ ದೇಹಾದರಿತ ಸಂಸ್ಕಾರಗಳು ,ನಡುವಳಿಕೆಗಳು ಕೆಳ ಸ್ತರದ ತಿಳುವಳಿಕೆಯ ಜನರಿಗೆ ಮಾತ್ರ ಸೀಮಿತ



ಪರಮ ಸತ್ಯದ ಅನ್ವೇಷಣೆಯಲ್ಲಿರುವ ಅನ್ವೇಷಕರು , ಅನೇಕ ರೀತಿಯ ವಿಚಾರದಾರೆಗಳ್ಳನ್ನು ವಿಶ್ಲೇಷಿಸುತ್ತ , ಅನೇಕ ವಿಚಾರವಂತರೊಡನೆ ವಿಮರ್ಶಿಸುತ್ತ, ಎಲ್ಲಿ ಹುಡುಕಿ ತಡಕಾಡಿದರು ಪರಮ ಸತ್ಯದ  ಅರಿವೂ ಹತ್ತಿರವೆನಿಸಿದರೂ ಸಹ ಅದು, ದೂರದ ಬೆಟ್ಟವಾಗಿಯೇ ಉಳಿಯುವದು. 

ಪುಸ್ತಕಗಳ ವಾಚನದಿಂದ, ಧರ್ಮ ಗ್ರಂಥಗಳ ಪಾಂಡಿತ್ಯದಿಂದ ,  ಬುದ್ದಿಮತ್ತೆಯ ಪ್ರದಶನದಿಂದ, ಧರ್ಮಗಳು ಮುಕ್ತಿಗಾಗಿ  ಸೂಚಿಸಿದ  ಮಾರ್ಗ ಸೂಚಿಯ ಆಚರಣೆಗಳಿಂದ, ಧಾರ್ಮಿಕ  ಮಡಿವಂತಿಕೆಯಿಂದ, ನಂಬಿಕೆಗಳನ್ನು ಪೂಜಿಸುವದರಿಂದ, ತೀರ್ಥ ಯಾತ್ರೆ ಕೈ ಕೊಳ್ಳುವದರಿಂದ, ಪವಿತ್ರ ನದಿಗಳಲ್ಲಿ  ಮಿಯುವದರಿಂದ , ಜಪ ತಪಾದಿಗಳಲ್ಲಿ ತೊಡಗುವರಿಂದ, ತಂತ್ರದ ಸಂಬೋಗದಲ್ಲಿ ತೊಡಗುವದರಿಂದ  ಹಾಗೂ  ಗುರುಗಳ ಪಾದ ಪೂಜೆ ಮಾಡುವದರಿಂದ ಆತ್ಮ ಜ್ಞಾನ ಅಸಾದ್ಯ.   ಈ ದೇಹಾದರಿತ  ಸಂಸ್ಕಾರಗಳು ,ನಡುವಳಿಕೆಗಳು ಕೆಳ  ಸ್ತರದ ತಿಳುವಳಿಕೆಯ  ಜನರಿಗೆ ಮಾತ್ರ  ಸೀಮಿತ , ಪರಮ ಸತ್ಯದ ಅನ್ವೇಷಣೆಯಲ್ಲಿ  ಅವುಗಳಿಗೆ ಯಾವ   ಬೆಲೆಯೂ  ಇಲ್ಲ.  ಈ ದೇಹದಾರಿತ ವಿಚಾರಗಳು ಕಲ್ಪನೆಗಳ ಆದರಿಸಿರುವದರಿಂದ ಅವುಗಳು ಸತ್ಯಕ್ಕೆ ದೂರವಾಗಿರುವವು.     

ಸ್ವ ಅಸ್ತಿತ್ವ ದೇಹವಲ್ಲ ,ಸ್ವ ಅಸ್ತಿತ್ವ ಆತ್ಮವೆಂಬುದನ್ನು  ಅರಿತು, ದೇಹದಾರಿತವಾದ ಎಲ್ಲವೂ ಮಾಯೆ ಎಂದು ಮನವರಿಕೆ ಮಾಡಿಕೊಂಡಾಗ , ಆತ್ಮವೇ ,ಸ್ವ ಅಸ್ತಿತ್ವವೆಂಬುದು    ಅಂತರಾಳದಲ್ಲಿ ದ್ರುಡವಾದಾಗ, ಈ ದೇಹ ಮತ್ತು ಜಗತ್ತಿನ ಅನುಬವವೂ ಸಹ ಅರಿವಿನ ರೂಪದಲ್ಲಿರುವ ಆತ್ಮದಿಂದ ಉದ್ಬವವಾದ ಮರೀಚಿಕೆ ಎಂಬುದು ಅರಿವಾಗಿ, ಮನಸ್ಸು ಮತ್ತು ಆತ್ಮ ದಲ್ಲಿ ಬೇದವಿರದಾಗ ಅದ್ವೈತ ಸತ್ಯದ ಅರಿವಾಗುವದು.                 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ