ಗುರುವಾರ 16 ಸಪ್ಟೆಂಬರ್ 2010

ಈ ಆತ್ಮದ ಮರಿವಿನಿಂದ ಉಂಟಾದ ಅಜ್ಞಾನ ಆತ್ಮ ಜ್ಞಾನದಿಂದ ಮಾತ್ರ ಹೋಗಲಾಡಿಸಲು ಸಾದ್ಯ.


ಈ  ಮೂರು ಅವಸ್ತೆಗಳು ಅಜ್ಞಾನದಿಂದ ಉದ್ಬವವಾಗಿರುವದರಿಂದ, ಸ್ವ ಅಸ್ತಿತ್ವ ಯಾವುದೆಂದು  ಅರಿವಾಗುವವರೆಗೆ, ಅವುಗಳ ಅನುಬವ ಸತ್ಯವೆಂದು ದೃಡ ನಂಬಿಕೆ ಇರುವದು. ಯಾವಾಗ ದೇಹ ಸ್ವ ಅಸ್ತಿತ್ವ ಅಲ್ಲವೆಂದು ಮನವರಿಕೆಯಾಗುತ್ತದೆಯೋ, ಆವಾಗ ದೇಹವಾಗಿ ಕಂಡ, ತಿಳಿದುಕೊಂಡ, ನಂಬಿದ ,ಅನುಬವಿಸಿದ ಎಲ್ಲ ವಿಷಯಗಳು ಸಹ  ಮಿತ್ಯವೆಂಬುದು ಮನವರಿಕೆಯಾಗುತ್ತದೆ. ಆದ್ದರಿಂದ ದೇಹಾದಾರಿತವಾದ   ಜಗತ್ತು, ನಂಬಿಕೆಯ  ದೇವರು ಸಹ  ಮಿತ್ಯ. 

ಈ ಆತ್ಮದ ಮರಿವಿನಿಂದ ಉಂಟಾದ ಅಜ್ಞಾನ ಆತ್ಮ ಜ್ಞಾನದಿಂದ ಮಾತ್ರ ಹೋಗಲಾಡಿಸಲು ಸಾದ್ಯ.  ಈ ದೇಹ ಮತ್ತು ಜಗತ್ತಿನ ಅಮಲಿನಲ್ಲಿ ಮೂಳುಗಿರುವ ಆತ್ಮವನ್ನು  ಸ್ವಯಂ ಅನ್ವೇಷಣೆಯಿಂದ ಮಾತ್ರ ಅರಿಯಲು ಸಾದ್ಯ. ಈ ಮರೀಚಿಕೆಯಾದ  ಜಗತ್ತಿನ ಸೃಷ್ಟಿಗೆ ಕಾರಣವಾದ ಆತ್ಮದ ಜ್ಞಾನವಾಗದೆ ಅಜ್ಞಾನದ ಕಕ್ಷೆಯಿಂದ ಹೊರಬರುವದು ಅಸಾದ್ಯ.                              

0 comments:

ಒಂದು ಕಮೆಂಟನ್ನು ಪೋಸ್ಟ್ ಮಾಡಿ